Monday, 24 November 2025

ಗುಣಮಟ್ಟದ ಪಾಠದ ಜೊತೆಗೆ ಮಕ್ಕಳಿಗೆ ಉತ್ತಮ ಗುಣಮಟ್ಟದ ಪುಸ್ತಕ ನೀಡಿ.



 ಒರಿಜಿನಲ್ ಪುಸ್ತಕ ಬೇಕಾದರೆ 8105348290 ಅಥವಾ 9036348290 ನಂಬರ್ ಗೆ ₹2999 ಫೋನ್ ಪೇ ಅಥವಾ ಗೂಗಲ್ ಪೇ ಮಾಡಿ ಸ್ಕ್ರೀನ್ ಶಾಟ್ ಕಳುಹಿಸಿ. ಜೊತೆಗೆ ಸರಿಯಾದ ವಿಳಾಸದ ಪಿನ್ ಕೋಡ್ ಕಳುಹಿಸಿದರೆ, ನಾವು 8 ಪುಸ್ತಕಗಳನ್ನು ಪೋಸ್ಟ್ ಮಾಡುತ್ತೇವೆ. 

2853 ಪುಟಗಳಿವೆ. ಜೆರಾಕ್ಸ್ ಬೆಲೆಗೆ ಉತ್ತಮ ಗುಣಮಟ್ಟದ ಪುಸ್ತಕಗಳು ಮಕ್ಕಳಿಗೆ ಓದಲು ಹಾಗೂ ರಿವಿಷನ್ ಮಾಡಲು ಹೆಚ್ಚು ಪರಿಣಾಮಕಾರಿಯಾಗಿರುತ್ತವೆ.

         ಧನ್ಯವಾದಗಳು.


Navodaya Coaching Videos 2026:

https://www.youtube.com/playlist?list=PLfsVXlcLzCGltGXocw13Rgw_MvV8dP6Nc


ನವೋದಯ ಪ್ರಿಲಿಮ್ಸ್ ( 3 ನೇ ತರಗತಿ ಮಕ್ಕಳಿಗೆ )

https://www.youtube.com/playlist?list=PLfsVXlcLzCGm1yvDEY5ubBVkBKArDwrFt


ನವೋದಯ ಪ್ರಿಲಿಮ್ಸ್ PDF ಬುಕ್ಸ್ 

https://drive.google.com/file/d/1xQJNEAt8ph1g1Vrauh5Ltpl9S73FFtbr/view?usp=sharing


ಸೈನಿಕ ಶಾಲೆ ಗಣಿತ 

https://www.youtube.com/playlist?list=PLfsVXlcLzCGkHAeD-CidVjVCbX-nuuB00

ಸೈನಿಕ ಶಾಲೆ ಇಂಟೆಲಿಜೆನ್ಸ್ 

https://www.youtube.com/playlist?list=PLfsVXlcLzCGmh8ty66rlo4jrHrhwX58i7


                          -- Santhosh Mandya Gowda, M.Tech (3rd Rank), (Ph.D)

                              Assistant Professor, Mandya Cubs Coaching Centre

                            Mob: 8105348290 & 9036348290 

                          

                                    

Sunday, 21 September 2025

ಶಿಕ್ಷಣ ಹಕ್ಕು ಕಾಯ್ದೆ 2010 ಏನು ಹೇಳುತ್ತೆ ಅಂದ್ರೆ..!

ಕೇಂದ್ರ ಸರ್ಕಾರ 2010ರಲ್ಲಿ ಜಾರಿಗೆ ತಂದ ಶಿಕ್ಷಣ ಕಾಯ್ದೆಯನ್ನು ರಾಜ್ಯದಲ್ಲಿ 2012ರಲ್ಲಿ ಅನುಷ್ಠಾನಗೊಳಿಸಲಾಗಿದೆ. ಈ ಕಾಯ್ದೆಯ ಸೆಕ್ಷನ್ -13ರ ಪ್ರಕಾರ ಡೊನೇಷನ್ ಪಡೆಯುವ, ಅಧಿಕ ಶುಲ್ಕ ವಸೂಲಿ ಮಾಡುವ ಶಾಲೆಗಳಿಗೆ ಅವು ವಸೂಲಿ ಮಾಡಿದ ಮೊತ್ತದ ಹತ್ತು ಪಟ್ಟು ದಂಡ ವಿಧಿಸಲು ಅವಕಾಶವಿದೆ. 
ಇದೇ ಕಾಯ್ದೆಯ ಸೆಕ್ಷನ್ 2 B ಪ್ರಕಾರ ಶುಲ್ಕದ ವಿವರವನ್ನು ಆಯಾ ಶಾಲೆ ಅವರು ಸಂಸ್ಥೆಯ ವೆಬ್ ಸೈಟ್ ನಲ್ಲಿ ಪ್ರಕಟಿಸಬೇಕು. ಪ್ರವೇಶದ ಅರ್ಜಿಯ ಜೊತೆಗೆ ವಿದ್ಯಾರ್ಥಿಗಳಿಗೆ ನೀಡುವ ಕಿರು ಹೊತ್ತಿಗೆಯಲ್ಲೂ ಅದನ್ನು ಮುದ್ರಿಸಬೇಕು. ಶಿಕ್ಷಣ ಇಲಾಖೆಯು ಶಾಲೆಗಳ ಶುಲ್ಕದ ವಿವರವನ್ನು ಆಯಾ ವರ್ಷ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಬೇಕು.

ರಾಜ್ಯ ಸರ್ಕಾರದ ಅಂಕುಶದಿಂದ ತಪ್ಪಿಸಿಕೊಳ್ಳಲು ಬಹುತೇಕ ಶಾಲೆಗಳು ಐಸಿಎಸ್‌ಸಿ, ಸಿಬಿಎಸ್‌ಸಿ ಪಠ್ಯಕ್ರಮದ ಮೊರೆ ಹೋಗುತ್ತಿವೆ. ಎಮ್ಮೆ ಯುಸಿ ಸಿಕ್ಕರೆ ತಮ್ಮ ಮೇಲೆ ರಾಜ್ಯದ ಶಿಕ್ಷಣ ಇಲಾಖೆ ನಿಯಂತ್ರಣ ಸಾಧಿಸೋದ ಕಷ್ಟ ಎಂಬ ಕಾರಣಕ್ಕೆ ಅವು ಈ ಜಾಣ ನಡೆ ಅನುಸರಿಸುತ್ತಿವೆ. ಆದರೆ ಶಿಕ್ಷಣ ಕಾಯಿದೆ ಹೇಳುವುದೇ ಬೇರೆ..!

ಕಾಯ್ದೆ ಸೆಕ್ಷನ್ 3ರ ಪ್ರಕಾರ ಶಾಲೆಗಳನ್ನು ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಎಂದು ವಿಭಜಿಸಲಾಗಿದೆಯೇ ಹೊರತು ರಾಜ್ಯ ಪಠ್ಯ, ಕೇಂದ್ರ ಪಠ್ಯ ಎಂಬ ವಿಭಜನೆ ಇಲ್ಲ. ಆದ್ದರಿಂದ ರಾಜ್ಯ ಸರ್ಕಾರ ಎಲ್ಲಾ ಪಠ್ಯಕ್ರಮ ಅನುಸರಿಸುವ ಶಾಲೆಗಳ ಮೇಲು ನಿಯಂತ್ರಣ ಸಾಧಿಸಬಹುದು.

ಲೇಖನ: ಸಂತೋಷ್ ಮಂಡ್ಯ ಗೌಡ,
ಅಧ್ಯಕ್ಷರು, ಹಸಿರು ಸೇನೆ, ಮಂಡ್ಯ ತಾಲೂಕು ರೈತ ಸಂಘ.

Wednesday, 31 January 2024

ದೇಶದ ಅತ್ಯುನ್ನತ ಗುಣಮಟ್ಟದ ಶಾಲೆಗಳೇ ಸೈನಿಕ ಶಾಲೆಗಳು..!




ಕೆಪಿಎಸ್‌ಸಿ ಮತ್ತು ಯುಪಿಎಸ್ಸಿ ಪರೀಕ್ಷೆ ತಯಾರಿಯ ಮೊದಲ ಹೆಜ್ಜೆಯೇ, ಐದನೇ ತರಗತಿಯಲ್ಲಿ ಬರುವ ಸೈನಿಕ ಶಾಲೆಯ ಪರೀಕ್ಷೆ. ಕೆಪಿಎಸ್ಸಿ ಮತ್ತು ಯುಪಿಎಸ್ಸಿ ಪರೀಕ್ಷೆ ಪಠ್ಯಕ್ರಮವನ್ನು 5ನೇ ತರಗತಿಯ ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ಸ್ಕೇಲ್ ಡೌನ್ ಮಾಡಿ ಸೈನಿಕ ಶಾಲೆಯ 5ನೇ ತರಗತಿಯ ಪರೀಕ್ಷೆ ಪಠ್ಯಕ್ರಮವನ್ನು ಸಿದ್ಧಪಡಿಸಲಾಗಿದೆ. 

ಇದು 5ನೇ ತರಗತಿ ಹಂತದಲ್ಲಿ ಬರುವ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದ ಅತ್ಯಂತ ಕಠಿಣ ಪರೀಕ್ಷೆಯಲ್ಲೊಂದಾಗಿದೆ. ಸೈನಿಕ ಶಾಲೆಯ ಪರೀಕ್ಷೆಯ ಮುಂದೆ ನವೋದಯ ಪರೀಕ್ಷೆ ಏನೇನು ಅಲ್ಲ. ಏಕೆಂದರೆ ನವೋದಯ ಶಾಲೆಗಳು ಪ್ರತಿ ಜಿಲ್ಲೆಯಲ್ಲಿ ಒಂದೊಂದು ಇದ್ದರೆ, ಪೂರ್ತಿ ರಾಜ್ಯದಲ್ಲಿ ಸೈನಿಕ ಶಾಲೆಗಳು ಇರುವುದು ಕೇವಲ ನಾಲ್ಕೆನಾಲ್ಕು..! 

ಸೈನಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸುವ ಮಕ್ಕಳಲ್ಲಿ ಶೇಕಡ 50ಕ್ಕೂ ಹೆಚ್ಚು ಮಕ್ಕಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಸರಕಾರಿ ಸಂಸ್ಥೆಗಳಿಗೆ ಸೇರಿದರೆ, ಉಳಿದ ಮಕ್ಕಳು ವಿವಿಧ ರಾಷ್ಟ್ರೀಯ ಅಂತರಾಷ್ಟ್ರೀಯ ಖಾಸಗಿ ಸಂಸ್ಥೆಗಳಲ್ಲಿ ಉನ್ನತ ಉದ್ಯೋಗದಲ್ಲಿದ್ದಾರೆ.

ಉತ್ತಮ ಗುಣಮಟ್ಟದ ಸಿಬಿಎಸ್‌ಸಿ ಪಠ್ಯಕ್ರಮದ ಶಿಕ್ಷಣದ ಜೊತೆ ಕ್ರೀಡೆಗೂ ಅಷ್ಟೇ ಪ್ರಮಾಣದ ಮಹತ್ವ ನೀಡುವ ಸೈನಿಕ ಶಾಲೆಗಳು, ಶಿಕ್ಷಣದ ಜೊತೆ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತರಬೇತಿಯನ್ನು ನೀಡುತ್ತವೆ. 

'ಉಳಿ ಪೆಟ್ಟು ತಿಂದ ಶಿಲೆ'ಯಂತೆ ಮಿಲಿಟರಿ ಶಿಕ್ಷಣ ತರಬೇತಿ ಪಡೆದ ಮಕ್ಕಳು ಬೆಳೆ ಬೆಳೆಯುತ್ತ ಮಾನಸಿಕವಾಗಿ ಸದೃಢರಾಗಿ ಜೀವನದಲ್ಲಿ ಬರುವ ಸಮಸ್ಯೆಗಳ ಜೊತೆ ಫುಟ್ಬಾಲ್ ಜೊತೆ ಆಟವಾಡುವ ರೀತಿ ಆಟವಾಡುತ್ತಾ ಜೀವನ ನಡೆಸುತ್ತಾರೆ. 

                                                        --ಪ್ರೊ. ಸಂತೋಷ್ ಮಂಡ್ಯಗೌಡ 

ಅಸಾಧ್ಯವಾದದ್ದನ್ನು ಸಾಧಿಸಬೇಕೆಂದರೆ ಹೃದಯದ ಮಾತು ಕೇಳಬೇಕು..!


ಟಿಬೆಟ್ ದೇಶದ ಲಾಸಾ ಯುನಿವರ್ಸಿಟಿಯಲ್ಲಿ ಯೋಗವನ್ನು ಒಂದು ಕಡ್ಡಾಯ ವಿಷಯವನ್ನಾಗಿ ಅಳವಡಿಸಿ ಪಾಠ ಮಾಡುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಯು ಯೋಗದ ಮೇಲೆ ನಡೆಯುವ ಪರೀಕ್ಷೆಗೆ ತಮ್ಮನ್ನು ಒಳಪಡಿಸಿಕೊಳ್ಳುತ್ತಾರೆ. ಅದರ ಹೆಸರು "Heat Yoga" ಅಥವಾ ಕನ್ನಡದಲ್ಲಿ ತಾಪಯೋಗ ಎಂದು ಕರೆಯಬಹುದು. ತಾಪಯೋಗದ ಪ್ರಕ್ರಿಯೆಯಲ್ಲಿ, ಮನಸ್ಸಿನ ಪ್ರಭಾವದಿಂದ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುವಂತೆ ಮಾಡಲಾಗುತ್ತದೆ. ಇದನ್ನು ನಂಬಲು ತುಂಬಾ ಕಷ್ಟ. ಏಕೆಂದರೆ ಕೊರೆಯುವ ಚಳಿಯ ಹಿಮ ಬೀಳುವ ಸಮಯದಲ್ಲಿ ಬೆತ್ತಲೆ ವಿದ್ಯಾರ್ಥಿಗಳನ್ನು ನಿಲ್ಲಿಸಿ, ಮನಸ್ಸಿನ ಪ್ರಭಾವದಿಂದ  ಬೆವರುವಂತೆ ಮಾಡುವುದು..!


        ಒಂದು ದಿನ ಪಾಶ್ಚಾತ್ಯ ದೇಶದ ಡಾಕ್ಟರ್ ಗಳ ಒಂದು ಸಮೂಹ, ತಾಪ ಯೋಗವನ್ನು ಖುದ್ದಾಗಿ ಪರೀಕ್ಷೆ ಮಾಡಲೆಂದೇ ಟಿಬೇಟಿಗೆ ಬಂದಿಳಿದಿತ್ತು. ಆ ದಿನ ಮಧ್ಯರಾತ್ರಿಯಲ್ಲಿ ಕೊರೆಯುವ ಚಳಿಯಲ್ಲಿ ಹರಿಯುತ್ತಿರುವ ನದಿಯ ಪಕ್ಕ ಮಳೆಯಂತೆ ಹಿಮ ಬೀಳುವ ಸಮಯದಲ್ಲಿ, ಕೆಲವು ವಿದ್ಯಾರ್ಥಿಗಳನ್ನು ಬೆತ್ತಲೆ ನಿಲ್ಲುವಂತೆ ಸೂಚಿಸಲಾಗಿತ್ತು. ಡಾಕ್ಟರ್ ಗಳು ಬೆಚ್ಚನೆಯ ದಪ್ಪ ಹತ್ತಿಯ ಬಟ್ಟೆ ಹಾಕಿದ್ದರೂ ಸಹ ಗಡಗಡ ನಡುಗುತ್ತಿದ್ದರೆ, ಅವರ ಮುಂದೆ ಬೆತ್ತಲೆ ನಿಂತ ವಿದ್ಯಾರ್ಥಿಗಳು ಬೆವರುತ್ತಿದ್ದರು..!

        ಇದು ಹೇಗೆ ಸಾಧ್ಯವಾಯಿತೆಂದರೆ, ಕೊರೆಯುವ ಚಳಿಯಲ್ಲಿ ಬೆತ್ತಲೆ ನಿಂತ ವಿದ್ಯಾರ್ಥಿಗಳು, ತಮ್ಮ ಮನಸ್ಸಿನಲ್ಲಿ, "ಇವತ್ತು ಚಳಿ ಇಲ್ಲ, ಹಿಮ ಬೀಳುತ್ತಿಲ್ಲ, ನಮ್ಮ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುತ್ತಿದೆ, ವಿಪರೀತ ಸೆಕೆ" ಎಂದು ಮನಸ್ಸಿನಲೇ ಹೇಳುತ್ತಿದ್ದರು.
ಇದರರ್ಥ ವಿದ್ಯಾರ್ಥಿಗಳ ದೇಹ ಪ್ರಕೃತಿಯ ಮಾತಿಗಿಂತ ಮನಸ್ಸಿನ ಮಾತು ಕೇಳುತ್ತಿತ್ತು..!
ಅದಿಕ್ಕೆ ಹೇಳಿದ್ದು ಯಾವಾಗಲೂ ಹೃದಯದ ಮಾತು ಕೇಳಬೇಕು ಅಂತ...

            --ಪ್ರೋ.  ಸಂತೋಷ್ ಮಂಡ್ಯಗೌಡ  

ಸೆಪ್ಟೆಂಬರ್ 28: ವಿಶ್ವ ರೇಬಿಸ್ ದಿನ


ಸೆಪ್ಟಂಬರ್ 28ರಂದು ಹುಚ್ಚುನಾಯಿ ರೋಗಕ್ಕೆ ಲಸಿಕೆ ಕಂಡುಹಿಡಿದ ಶ್ರೇಷ್ಠ ವಿಜ್ಞಾನಿ ಲೂಯಿ ಪಾಶ್ಚರ್ ನಿಧನರಾದ ದಿನ. ಈ ದಿನವನ್ನು ಗೌರವಾರ್ಥವಾಗಿ ವಿಶ್ವ ರೇಬಿಸ್ ದಿನವನ್ನಾಗಿ ಆಚರಿಸಲಾಗುತ್ತದೆ.

 ಪ್ರತಿ ವರ್ಷ ರೇಬಿಸ್ ರೋಗಕ್ಕೆ ವಿಶ್ವದಲ್ಲಿ 59 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗುತ್ತಿದ್ದಾರೆ. ಮತ್ತು ಭಾರತದಲ್ಲಿ ಪ್ರತಿ ವರ್ಷ ನಾಯಿ ಕಡಿತದ ಒಂದು ಮುಕ್ಕಾಲು ಕೋಟಿ ಪ್ರಕರಣಗಳು ವರದಿಯಾಗುತ್ತಿವೆ.

 ನಿಮಗೆ ತಿಳಿದಿರಲಿ ರೆಬಿಸ್ ರೋಗಕ್ಕೆ ಯಾವುದೇ ಮದ್ದಿಲ್ಲ. ಅದಕ್ಕೆ ಮುಂಜಾಗ್ರತೆಯೇ ಮದ್ದು. ಆದ್ದರಿಂದ ಸಾಕು ನಾಯಿಗಳಿಗೆ ಲಸಿಕೆ ಹಾಕಿಸುವುದು ಪ್ರತಿಯೊಬ್ಬ ಮಾಲೀಕನ ಕರ್ತವ್ಯ ಮತ್ತು ಬೀದಿ ನಾಯಿಗಳನ್ನು ನಿಯಂತ್ರಣದಲ್ಲಿ ಇಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ.

 ಭಾರತ ಸರ್ಕಾರವು ಈ ವಿಷಯದಲ್ಲಿ ಒಂದು ಕಾರ್ಯ ಯೋಜನೆ ರೂಪಿಸಿದೆ. ಪ್ರತಿ ವರ್ಷ ಸೆಪ್ಟೆಂಬರ್ 15 ರಿಂದ 30 ರವರೆಗೆ ಸರ್ಕಾರಿ ಪಶು ವೈದ್ಯ ಆಸ್ಪತ್ರೆಯಲ್ಲಿ ಸಾಕು ನಾಯಿಗಳಿಗೆ ಉಚಿತವಾಗಿ ಲಸಿಕೆ ನೀಡಲಾಗುತ್ತದೆ.

 ನಾಯಿ ಕಡಿದ ತಕ್ಷಣ ಸ್ವಚ್ಛ ನೀರಿನಿಂದ ಚೆನ್ನಾಗಿ ತೊಳೆದು ನಂಜು ನಿವಾರಕ ಅಯೋಡಿನ್ ಅಥವಾ ಸ್ಪಿರಿಟ್ ಹಾಕಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಎಂಟು ಗಂಟೆಯೊಳಗೆ ಲಸಿಕೆ ಪಡೆಯಬೇಕು. ಅಕಸ್ಮಾತ್ ಗಾಯ ತೀವ್ರವಾಗಿದ್ದರೆ ಗಾಯದ ಸುತ್ತಲೂ ರೇಬಿಸ್  ಇಮ್ಯುನೋಗ್ಲೋಬುಲಿನ್ ಚುಚ್ಚುಮದ್ದು ತೆಗೆದುಕೊಳ್ಳಬೇಕು.



 ಕೊನೆಯದಾಗಿ ಈ ವಿಷಯದಲ್ಲಿ ಮನೆ ಮದ್ದು ಬಳಸುವುದು ಅಥವಾ ನಾಟಿ ವೈದ್ಯರನ್ನು ಸಂಪರ್ಕಿಸುವುದು ಸಾವಿಗೆ ಆಹ್ವಾನ ಕೊಟ್ಟಂತೆ.

 ಕೃಪೆ : ಡಾ. ಮುರಳಿಧರ ಕಿರಣಕೆರೆ,

 ಬರಹ ಸಂಯೋಜನೆ --  ಸಂತೋಷ್ ಮಂಡ್ಯಗೌಡ

ಸಾವಿಗೂ ಮುನ್ನ..!

 

ನಿಮಗೆ ಇಷ್ಟವಾಗುತ್ತೋ ಬಿಡುತ್ತೋ ಗೊತ್ತಿಲ್ಲ. ಇವತ್ತಲ್ಲ ನಾಳೆ ಒಂದಲ್ಲಾ ಒಂದು ದಿನ ನಾವು ಮಣ್ಣಾಗಲೇಬೇಕು. ಇದನ್ನು ಒಂದು ಸಣ್ಣ ಕಥೆಯ ಮೂಲಕ ಅರ್ಥ ಮಾಡಿಸುವ ಪ್ರಯತ್ನ ಮಾಡುತ್ತೇನೆ.
 ಒಂದು ದಿನ ಅಮೆರಿಕಾದ ಹೆಸರಾಂತ ಉದ್ಯಮಿ, ಹೂಡಿಕೆದಾರ, ಲೇಖಕ, ದಾನಿ ಮತ್ತು ರಾಜಕಾರಣಿಯಾದ ಟೆಡ್ ಲಿಯೋನ್ ಅವರು ವಿಮಾನದಲ್ಲಿ ಹೋಗುತ್ತಿರುವಾಗ ಪೈಲೆಟ್ ವಿಮಾನ ಪತನವಾಗುವ ಸೂಚನೆ ನೀಡುತ್ತಾನೆ. ಟೆಡ್  ಲಿಯೋನ್ ಗೆ ಸಾವು ಕಣ್ಣ ಮುಂದೆ ಬಂದು ನಿಂತಿರುವ ಅನುಭವವಾಗುತ್ತದೆ. ತಕ್ಷಣ ಟೆಡ್ ಲಿಯೋನ್ ಅವರು ಜೀವನದಲ್ಲಿ ತಾನು ಅತಿ ಶೀಘ್ರವಾಗಿ ಮಾಡಲೇಬೇಕಾದ ಕೆಲಸಗಳು, ಭೇಟಿ ಮಾಡಬೇಕಾದ ವ್ಯಕ್ತಿಗಳು ಮತ್ತು ನೋಡಬೇಕಾದ ಸ್ಥಳಗಳ ಬಗ್ಗೆ ಯೋಚಿಸುತ್ತಾ ಕುಳಿತಿರುತ್ತಾನೆ. ಅವನ ಅದೃಷ್ಟಕ್ಕೆ ವಿಮಾನ ಸುರಕ್ಷಿತವಾಗಿ ಕೆಳಗಿಳಿಯುತ್ತದೆ.
 ವಿಮಾನದಿಂದ ಇಳಿದ ತಕ್ಷಣವೇ ವಿಮಾನ ನಿಲ್ದಾಣದಲ್ಲಿ ಕುಳಿತು ಜೀವನದಲ್ಲಿ ಮಾಡಬೇಕಾದ 101 ಕೆಲಸಗಳ ಪಟ್ಟಿ ತಯಾರು ಮಾಡಿ ಸಾಯುವ ಮುಂಚೆ ಅದನ್ನು ಪೂರ್ತಿಗೊಳಿಸುವ ಪ್ರತಿಜ್ಞೆ ಮಾಡುತ್ತಾನೆ. ತದನಂತರ ಕೆಲವೇ ಕೆಲವು ವರ್ಷಗಳಲ್ಲಿ ಎಷ್ಟೋ ಕೆಲಸಗಳನ್ನು ಮಾಡಿ ಮುಗಿಸಿರುತ್ತಾನೆ.
 ಈ ಸಣ್ಣ ನಿಜ ಜೀವನದಲ್ಲಿ ನಡೆದ ನೈಜ ಕಥೆಯನ್ನು ನೋಡಿದರೆ ನಮ್ಮ ಜೀವನದಲ್ಲೂ ಅತೀ ಶೀಘ್ರವಾಗಿ ಮಾಡಬೇಕಾದ ಒಳ್ಳೆಯ ಕೆಲಸಗಳ ಪಟ್ಟಿ ತಯಾರಿ ಮಾಡುವುದು ಉತ್ತಮವೆನಿಸುತ್ತದೆ.
 ಯಾರಿಗೆ ಗೊತ್ತು ಜವರಾಯ ಯಾವ ದಾರಿಯಲ್ಲಿ ನಮ್ಮ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದಾನೆ ಅಂತಾ?

ಕೃಪೆ: ರಾಬಿನ್ ಶರ್ಮಾ

ಭಾಷಾಂತರ

-- ಸಂತೋಷ್ ಮಂಡ್ಯಗೌಡ 

ದಿನಕ್ಕೆ ಎಂಟು ಗಂಟೆ ನಿದ್ರೆ ಮಾಡುವವರೇ ಶ್ರೀಮಂತರು..!

      ಪ್ರಪಂಚದಲ್ಲಿ ಯಾವುದಾದರೂ ಪ್ರಾಣಿಗಳು ಹೃದಯಾಘಾತ ಅಥವಾ ಲಕ್ವಾ ಒಡೆದು ಸತ್ತ ಉದಾಹರಣೆಗಳಿವೆಯೇ? ಖಂಡಿತ ಇಲ್ಲ. ಏಕೆಂದರೆ ಅವುಗಳು ದಿನದ ಮೂರನೇ ಒಂದು ಭಾಗ ಅಂದರೆ ಎಂಟು ಗಂಟೆಗಳಿಗಿಂತ ಜಾಸ್ತಿ ನಿದ್ರೆ ಮಾಡುತ್ತವೆ.

    ಇನ್ನು ಮನುಷ್ಯರ ವಿಚಾರಕ್ಕೆ ಬಂದರೆ ವಯಸ್ಕರಿಗೆ 8 ನಿದ್ರೆಯ ಅವಶ್ಯಕತೆ ಇದ್ದರೆ, ಮಕ್ಕಳಿಗೆ 10 ಗಂಟೆ ನಿದ್ರೆಯ ಅವಶ್ಯಕತೆ ಇರುತ್ತದೆ. ಇನ್ನು ಸರಳವಾಗಿ ಹೇಳಬೇಕಾದರೆ ಮೊಬೈಲನ್ನು ಅರ್ಧ ಚಾರ್ಜ್ ಮಾಡಿದರೆ ಎಷ್ಟು ಹೊತ್ತು ಉಪಯೋಗಿಸಬಹುದೋ, ಹಾಗೆ, ಮನುಷ್ಯ ಅರ್ಧ ನಿದ್ರೆ ಮಾಡಿದರೆ ಸರಿಯಾಗಿ ಅರ್ಧದಷ್ಟು ಕೆಲಸವನ್ನು ಅವರಿಂದ ನಿರೀಕ್ಷಿಸಲು ಮಾತ್ರ ಸಾಧ್ಯ.

    ಇನ್ನು ಸ್ಪಷ್ಟವಾಗಿ ಹೇಳಬೇಕಾದರೆ ಸರಿಯಾಗಿ ನಿದ್ದೆ ಮಾಡದೆ ಹೋದರೆ, ಅದು ಮಕ್ಕಳ ಕಲಿಕೆ, ನೆನಪಿನ ಶಕ್ತಿ ಮತ್ತು ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಮತ್ತು ವಯಸ್ಕರಲ್ಲಿ ರಕ್ತದೊತ್ತಡ, ಸ್ಥೂಲಕಾಯ ಹೆಚ್ಚು ಮಾಡುತ್ತದೆ.

    ಇನ್ನು ಸಂಕ್ಷಿಪ್ತವಾಗಿ ಹೇಳಬೇಕಾದರೆ, ದಿನನಿತ್ಯ ನಾವು ಸೇವಿಸುವ ಆಹಾರದಿಂದ ಉಂಟಾಗುವ ಶಾರೀರಿಕ ತ್ಯಾಜ್ಯವನ್ನು ಹೊರಹಾಕಲು ಯಾವ ರೀತಿ ನಾವು ಪ್ರತಿನಿತ್ಯ ಶೌಚಾಲಯಕ್ಕೆ ಹೋಗುತ್ತಿವೋ, ಅದೇ ರೀತಿ ಮಾನಸಿಕ ತ್ಯಾಜ್ಯಗಳನ್ನು ಹೊರಹಾಕಲು ಪ್ರತಿನಿತ್ಯ ನಾವು ಎಂಟು ಗಂಟೆಗಳ ಗಡತ್ತಾದ ನಿದ್ದೆ ಮಾಡಬೇಕು.

    ಸಂಶೋಧನೆಯ ಪ್ರಕಾರ, ಬೇಸಿಗೆ ಕಾಲದಲ್ಲಿ ಒಂದು ಗಂಟೆ ಕಡಿಮೆ ನಿದ್ರೆ ಮಾಡಿದರೆ ಮುಂದಿನ ದಿನ ಶೇಕಡ 24 ರಷ್ಟು ಹೃದಯಘಾತವಾಗುವ ಸಂಭವವಿರುತ್ತದೆ.
ಚಳಿಗಾಲದ ಸಮಯದಲ್ಲಿ ಒಂದು ಗಂಟೆ ಹೆಚ್ಚು ನಿದ್ರೆ ಮಾಡಿದರೆ, ಅದರ ಮುಂದಿನ ದಿನ ಹೃದಯಾಘಾತದ ಸಂಭವ ಶೇ. 21ರಷ್ಟು ಕಡಿಮೆಯಾಗುತ್ತದೆ.
    ಆದ್ದರಿಂದ  ದಿನಕ್ಕೆ ಎಂಟು ಗಂಟೆ ನಿದ್ರೆ ಮಾಡುವವರೇ ಶ್ರೀಮಂತರು!


ಈಗ ನಿದ್ರಾಹೀನತೆಯಿಂದ ಉಂಟಾಗುವ ಅಡ್ಡ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ...

1965ನೇ ಇಸವಿಯಲ್ಲಿ 17 ವರ್ಷದ ವಿದ್ಯಾರ್ಥಿ ನಿದ್ರೆನೇ ಮಾಡದೇ ಹೋದರೆ ಏನಾಗುತ್ತೆ ಅಂತ 264 ಗಂಟೆ ಅಂದರೆ 11 ದಿನ ಎಚ್ಚರವಾಗಿ ಸಂಶೋಧನೆಗೆ ಒಳಪಟ್ಟಿದ್ದ. 11 ದಿನಗಳ ನಂತರ ಅವನ ದೃಷ್ಟಿ ಕಡಿಮೆಯಾಗಿ, ವಸ್ತುಗಳನ್ನು ಸ್ಪರ್ಶದಿಂದ ಗುರಿತಿಸುವುದು ಕಡಿಮೆಯಾಯಿತು. ತದನಂತರ ನೆನಪಿನ ಶಕ್ತಿ ಕ್ಷೀಣಿಸುತ್ತಾ ಹೋಗಿ ಕೊನೆಗೆ ಬುದ್ಧಿಬ್ರಮಣೆಯಾಗುತ್ತಾ ಹೋಯಿತು.
    ಇನ್ನೊಂದು ಉದಾಹರಣೆಯಲ್ಲಿ, 2014ರಲ್ಲಿ ಫುಟ್ಬಾಲ್ ಪ್ರೇಮಿಯೊಬ್ಬರು ಸತತ 48 ಗಂಟೆಗಳ ಕಾಲ ಫುಟ್ಬಾಲ್ ವರ್ಲ್ಡ್ ಕಪ್ ನೋಡುತ್ತಾ ಶಿವನಪಾದ ಸೇರಿದ್ದ. ಅದಕ್ಕೆ ವೈದ್ಯಕೀಯ ಕಾರಣ ಕಡಿಮೆ ನಿದ್ರೆಯಿಂದ ಲಕ್ವ ಹೊಡೆದು  ಮೃತಪಟ್ಟಿದ್ದ.

    ಈಗ ನಮ್ಮ ಪುನೀತ್ ರಾಜಕುಮಾರ್ ರವರ ದಿನಚರಿ ನೆನಪಿಸಿಕೊಳ್ಳಿ. ಪ್ರತಿನಿತ್ಯ ರಾತ್ರಿ ಲೇಟ್ ನೈಟ್ ಪಾರ್ಟಿಗಳು ಮತ್ತು ಮುಂಜಾನೆ ತೀವ್ರವಾದ ದೈಹಿಕ ವ್ಯಾಯಾಮಗಳು. ಅವರ ಸಾವಿಗೆ ಕಡಿಮೆ ನಿದ್ರೆಯ ಜೊತೆ ಸೆಲೆಬ್ರಿಟಿ ಒತ್ತಡವು ಒಂದು ಕಾರಣವಿರಬಹುದು. ಇದೇ ಕಾರಣಕ್ಕೆ ಪ್ರತಿನಿತ್ಯ ಪ್ರಪಂಚದಲ್ಲಿ ನೂರಾರು ಜನ ಸಾಯುತ್ತಾ ಇರುತ್ತಾರೆ ಅವರ್ಯಾರು ಸೆಲೆಬ್ರಿಟಿ ಆಗದೇ ಇರುವುದರಿಂದ ನಮಗೆ ಗೊತ್ತಿರುವುದಿಲ್ಲ ಅಷ್ಟೇ.

8 ಗಂಟೆ ಸುಖನಿದ್ರೆಯ ಮೊದಲ ಸೂತ್ರವೇ ಕ್ರಮಬದ್ಧ ಜೀವನ ಶೈಲಿ. ಅದು ಶನಿವಾರವಾದರೂ ಇರಬಹುದು ಅಥವಾ ಸೋಮವಾರವಾದರೂ ಇರಬಹುದು, ದಿನನಿತ್ಯ ರಾತ್ರಿ ಒಂದೇ ಸಮಯಕ್ಕೆ ಮಲಗಬೇಕು ಮತ್ತು ಬೆಳಿಗ್ಗೆ ಒಂದೇ ಸಮಯಕ್ಕೆ ಎದ್ದೇಳಬೇಕು.
    ಎರಡನೇ ಸೂತ್ರವೆಂದರೆ ಮಲಗುವ ರೂಮಿನ ಉಷ್ಣಾಂಶವನ್ನು 18° ಡಿಗ್ರಿ ಸೆಲ್ಸಿಯಸ್  ಇರುವಂತೆ ನೋಡಿಕೊಂಡರೆ ಉತ್ತಮ ನಿದ್ರೆ ಬರುತ್ತದೆ.
    ಮೂರನೇ ಸೂತ್ರವೆಂದರೆ ರಾತ್ರಿ 8 ಗಂಟೆಗೆ ಮೊದಲೇ ಊಟ ಮುಗಿಸಿ, 10 ಗಂಟೆಯ ಒಳಗೆ ಮಲಗಿದರೆ ಬೆಳಗ್ಗೆ 6 ಗಂಟೆಗೆ ಎದ್ದೇಳಬಹುದು.

        ಕೊನೆಯದಾಗಿ ಹೆಚ್ಚು ನಿದ್ರೆ ಮಾಡಿದರಷ್ಟೇ ಜಾಸ್ತಿ ದಿನ ಬದುಕಬಹುದು ಅಂತ ಏನಾದರೂ ಎಂಟು ಗಂಟೆಗಿಂತ ಜಾಸ್ತಿ ಮಲಗಿದರೆ, ಭಗವದ್ಗೀತೆಯಲ್ಲಿ ಹೇಳಿರುವಂತೆ ದುಃಖ ದಾರಿದ್ಯ ನಮ್ಮನ್ನು ಅಟ್ಟಾಡಿಸಿಕೊಂಡು ಬರುತ್ತದೆ ಮತ್ತು ಈ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಬದುಕಲು ನಿಜವಾಗಲೂ ಸಾಧ್ಯವಿಲ್ಲ.

                                                                                    -- ಪ್ರೊ.  ಸಂತೋಷ್ ಮಂಡ್ಯಗೌಡ 

ಗುಣಮಟ್ಟದ ಪಾಠದ ಜೊತೆಗೆ ಮಕ್ಕಳಿಗೆ ಉತ್ತಮ ಗುಣಮಟ್ಟದ ಪುಸ್ತಕ ನೀಡಿ.

 ಒರಿಜಿನಲ್ ಪುಸ್ತಕ ಬೇಕಾದರೆ 8105348290 ಅಥವಾ 9036348290 ನಂಬರ್ ಗೆ ₹2999 ಫೋನ್ ಪೇ ಅಥವಾ ಗೂಗಲ್ ಪೇ ಮಾಡಿ ಸ್ಕ್ರೀನ್ ಶಾಟ್ ಕಳುಹಿಸಿ. ಜೊತೆಗೆ ಸರಿಯಾದ ವಿಳಾಸದ ಪಿ...