Wednesday, 31 January 2024

ದೇಶದ ಅತ್ಯುನ್ನತ ಗುಣಮಟ್ಟದ ಶಾಲೆಗಳೇ ಸೈನಿಕ ಶಾಲೆಗಳು..!




ಕೆಪಿಎಸ್‌ಸಿ ಮತ್ತು ಯುಪಿಎಸ್ಸಿ ಪರೀಕ್ಷೆ ತಯಾರಿಯ ಮೊದಲ ಹೆಜ್ಜೆಯೇ, ಐದನೇ ತರಗತಿಯಲ್ಲಿ ಬರುವ ಸೈನಿಕ ಶಾಲೆಯ ಪರೀಕ್ಷೆ. ಕೆಪಿಎಸ್ಸಿ ಮತ್ತು ಯುಪಿಎಸ್ಸಿ ಪರೀಕ್ಷೆ ಪಠ್ಯಕ್ರಮವನ್ನು 5ನೇ ತರಗತಿಯ ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ಸ್ಕೇಲ್ ಡೌನ್ ಮಾಡಿ ಸೈನಿಕ ಶಾಲೆಯ 5ನೇ ತರಗತಿಯ ಪರೀಕ್ಷೆ ಪಠ್ಯಕ್ರಮವನ್ನು ಸಿದ್ಧಪಡಿಸಲಾಗಿದೆ. 

ಇದು 5ನೇ ತರಗತಿ ಹಂತದಲ್ಲಿ ಬರುವ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದ ಅತ್ಯಂತ ಕಠಿಣ ಪರೀಕ್ಷೆಯಲ್ಲೊಂದಾಗಿದೆ. ಸೈನಿಕ ಶಾಲೆಯ ಪರೀಕ್ಷೆಯ ಮುಂದೆ ನವೋದಯ ಪರೀಕ್ಷೆ ಏನೇನು ಅಲ್ಲ. ಏಕೆಂದರೆ ನವೋದಯ ಶಾಲೆಗಳು ಪ್ರತಿ ಜಿಲ್ಲೆಯಲ್ಲಿ ಒಂದೊಂದು ಇದ್ದರೆ, ಪೂರ್ತಿ ರಾಜ್ಯದಲ್ಲಿ ಸೈನಿಕ ಶಾಲೆಗಳು ಇರುವುದು ಕೇವಲ ನಾಲ್ಕೆನಾಲ್ಕು..! 

ಸೈನಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸುವ ಮಕ್ಕಳಲ್ಲಿ ಶೇಕಡ 50ಕ್ಕೂ ಹೆಚ್ಚು ಮಕ್ಕಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಸರಕಾರಿ ಸಂಸ್ಥೆಗಳಿಗೆ ಸೇರಿದರೆ, ಉಳಿದ ಮಕ್ಕಳು ವಿವಿಧ ರಾಷ್ಟ್ರೀಯ ಅಂತರಾಷ್ಟ್ರೀಯ ಖಾಸಗಿ ಸಂಸ್ಥೆಗಳಲ್ಲಿ ಉನ್ನತ ಉದ್ಯೋಗದಲ್ಲಿದ್ದಾರೆ.

ಉತ್ತಮ ಗುಣಮಟ್ಟದ ಸಿಬಿಎಸ್‌ಸಿ ಪಠ್ಯಕ್ರಮದ ಶಿಕ್ಷಣದ ಜೊತೆ ಕ್ರೀಡೆಗೂ ಅಷ್ಟೇ ಪ್ರಮಾಣದ ಮಹತ್ವ ನೀಡುವ ಸೈನಿಕ ಶಾಲೆಗಳು, ಶಿಕ್ಷಣದ ಜೊತೆ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತರಬೇತಿಯನ್ನು ನೀಡುತ್ತವೆ. 

'ಉಳಿ ಪೆಟ್ಟು ತಿಂದ ಶಿಲೆ'ಯಂತೆ ಮಿಲಿಟರಿ ಶಿಕ್ಷಣ ತರಬೇತಿ ಪಡೆದ ಮಕ್ಕಳು ಬೆಳೆ ಬೆಳೆಯುತ್ತ ಮಾನಸಿಕವಾಗಿ ಸದೃಢರಾಗಿ ಜೀವನದಲ್ಲಿ ಬರುವ ಸಮಸ್ಯೆಗಳ ಜೊತೆ ಫುಟ್ಬಾಲ್ ಜೊತೆ ಆಟವಾಡುವ ರೀತಿ ಆಟವಾಡುತ್ತಾ ಜೀವನ ನಡೆಸುತ್ತಾರೆ. 

                                                        --ಪ್ರೊ. ಸಂತೋಷ್ ಮಂಡ್ಯಗೌಡ 

ಅಸಾಧ್ಯವಾದದ್ದನ್ನು ಸಾಧಿಸಬೇಕೆಂದರೆ ಹೃದಯದ ಮಾತು ಕೇಳಬೇಕು..!


ಟಿಬೆಟ್ ದೇಶದ ಲಾಸಾ ಯುನಿವರ್ಸಿಟಿಯಲ್ಲಿ ಯೋಗವನ್ನು ಒಂದು ಕಡ್ಡಾಯ ವಿಷಯವನ್ನಾಗಿ ಅಳವಡಿಸಿ ಪಾಠ ಮಾಡುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಯು ಯೋಗದ ಮೇಲೆ ನಡೆಯುವ ಪರೀಕ್ಷೆಗೆ ತಮ್ಮನ್ನು ಒಳಪಡಿಸಿಕೊಳ್ಳುತ್ತಾರೆ. ಅದರ ಹೆಸರು "Heat Yoga" ಅಥವಾ ಕನ್ನಡದಲ್ಲಿ ತಾಪಯೋಗ ಎಂದು ಕರೆಯಬಹುದು. ತಾಪಯೋಗದ ಪ್ರಕ್ರಿಯೆಯಲ್ಲಿ, ಮನಸ್ಸಿನ ಪ್ರಭಾವದಿಂದ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುವಂತೆ ಮಾಡಲಾಗುತ್ತದೆ. ಇದನ್ನು ನಂಬಲು ತುಂಬಾ ಕಷ್ಟ. ಏಕೆಂದರೆ ಕೊರೆಯುವ ಚಳಿಯ ಹಿಮ ಬೀಳುವ ಸಮಯದಲ್ಲಿ ಬೆತ್ತಲೆ ವಿದ್ಯಾರ್ಥಿಗಳನ್ನು ನಿಲ್ಲಿಸಿ, ಮನಸ್ಸಿನ ಪ್ರಭಾವದಿಂದ  ಬೆವರುವಂತೆ ಮಾಡುವುದು..!


        ಒಂದು ದಿನ ಪಾಶ್ಚಾತ್ಯ ದೇಶದ ಡಾಕ್ಟರ್ ಗಳ ಒಂದು ಸಮೂಹ, ತಾಪ ಯೋಗವನ್ನು ಖುದ್ದಾಗಿ ಪರೀಕ್ಷೆ ಮಾಡಲೆಂದೇ ಟಿಬೇಟಿಗೆ ಬಂದಿಳಿದಿತ್ತು. ಆ ದಿನ ಮಧ್ಯರಾತ್ರಿಯಲ್ಲಿ ಕೊರೆಯುವ ಚಳಿಯಲ್ಲಿ ಹರಿಯುತ್ತಿರುವ ನದಿಯ ಪಕ್ಕ ಮಳೆಯಂತೆ ಹಿಮ ಬೀಳುವ ಸಮಯದಲ್ಲಿ, ಕೆಲವು ವಿದ್ಯಾರ್ಥಿಗಳನ್ನು ಬೆತ್ತಲೆ ನಿಲ್ಲುವಂತೆ ಸೂಚಿಸಲಾಗಿತ್ತು. ಡಾಕ್ಟರ್ ಗಳು ಬೆಚ್ಚನೆಯ ದಪ್ಪ ಹತ್ತಿಯ ಬಟ್ಟೆ ಹಾಕಿದ್ದರೂ ಸಹ ಗಡಗಡ ನಡುಗುತ್ತಿದ್ದರೆ, ಅವರ ಮುಂದೆ ಬೆತ್ತಲೆ ನಿಂತ ವಿದ್ಯಾರ್ಥಿಗಳು ಬೆವರುತ್ತಿದ್ದರು..!

        ಇದು ಹೇಗೆ ಸಾಧ್ಯವಾಯಿತೆಂದರೆ, ಕೊರೆಯುವ ಚಳಿಯಲ್ಲಿ ಬೆತ್ತಲೆ ನಿಂತ ವಿದ್ಯಾರ್ಥಿಗಳು, ತಮ್ಮ ಮನಸ್ಸಿನಲ್ಲಿ, "ಇವತ್ತು ಚಳಿ ಇಲ್ಲ, ಹಿಮ ಬೀಳುತ್ತಿಲ್ಲ, ನಮ್ಮ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುತ್ತಿದೆ, ವಿಪರೀತ ಸೆಕೆ" ಎಂದು ಮನಸ್ಸಿನಲೇ ಹೇಳುತ್ತಿದ್ದರು.
ಇದರರ್ಥ ವಿದ್ಯಾರ್ಥಿಗಳ ದೇಹ ಪ್ರಕೃತಿಯ ಮಾತಿಗಿಂತ ಮನಸ್ಸಿನ ಮಾತು ಕೇಳುತ್ತಿತ್ತು..!
ಅದಿಕ್ಕೆ ಹೇಳಿದ್ದು ಯಾವಾಗಲೂ ಹೃದಯದ ಮಾತು ಕೇಳಬೇಕು ಅಂತ...

            --ಪ್ರೋ.  ಸಂತೋಷ್ ಮಂಡ್ಯಗೌಡ  

ಸೆಪ್ಟೆಂಬರ್ 28: ವಿಶ್ವ ರೇಬಿಸ್ ದಿನ


ಸೆಪ್ಟಂಬರ್ 28ರಂದು ಹುಚ್ಚುನಾಯಿ ರೋಗಕ್ಕೆ ಲಸಿಕೆ ಕಂಡುಹಿಡಿದ ಶ್ರೇಷ್ಠ ವಿಜ್ಞಾನಿ ಲೂಯಿ ಪಾಶ್ಚರ್ ನಿಧನರಾದ ದಿನ. ಈ ದಿನವನ್ನು ಗೌರವಾರ್ಥವಾಗಿ ವಿಶ್ವ ರೇಬಿಸ್ ದಿನವನ್ನಾಗಿ ಆಚರಿಸಲಾಗುತ್ತದೆ.

 ಪ್ರತಿ ವರ್ಷ ರೇಬಿಸ್ ರೋಗಕ್ಕೆ ವಿಶ್ವದಲ್ಲಿ 59 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗುತ್ತಿದ್ದಾರೆ. ಮತ್ತು ಭಾರತದಲ್ಲಿ ಪ್ರತಿ ವರ್ಷ ನಾಯಿ ಕಡಿತದ ಒಂದು ಮುಕ್ಕಾಲು ಕೋಟಿ ಪ್ರಕರಣಗಳು ವರದಿಯಾಗುತ್ತಿವೆ.

 ನಿಮಗೆ ತಿಳಿದಿರಲಿ ರೆಬಿಸ್ ರೋಗಕ್ಕೆ ಯಾವುದೇ ಮದ್ದಿಲ್ಲ. ಅದಕ್ಕೆ ಮುಂಜಾಗ್ರತೆಯೇ ಮದ್ದು. ಆದ್ದರಿಂದ ಸಾಕು ನಾಯಿಗಳಿಗೆ ಲಸಿಕೆ ಹಾಕಿಸುವುದು ಪ್ರತಿಯೊಬ್ಬ ಮಾಲೀಕನ ಕರ್ತವ್ಯ ಮತ್ತು ಬೀದಿ ನಾಯಿಗಳನ್ನು ನಿಯಂತ್ರಣದಲ್ಲಿ ಇಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ.

 ಭಾರತ ಸರ್ಕಾರವು ಈ ವಿಷಯದಲ್ಲಿ ಒಂದು ಕಾರ್ಯ ಯೋಜನೆ ರೂಪಿಸಿದೆ. ಪ್ರತಿ ವರ್ಷ ಸೆಪ್ಟೆಂಬರ್ 15 ರಿಂದ 30 ರವರೆಗೆ ಸರ್ಕಾರಿ ಪಶು ವೈದ್ಯ ಆಸ್ಪತ್ರೆಯಲ್ಲಿ ಸಾಕು ನಾಯಿಗಳಿಗೆ ಉಚಿತವಾಗಿ ಲಸಿಕೆ ನೀಡಲಾಗುತ್ತದೆ.

 ನಾಯಿ ಕಡಿದ ತಕ್ಷಣ ಸ್ವಚ್ಛ ನೀರಿನಿಂದ ಚೆನ್ನಾಗಿ ತೊಳೆದು ನಂಜು ನಿವಾರಕ ಅಯೋಡಿನ್ ಅಥವಾ ಸ್ಪಿರಿಟ್ ಹಾಕಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಎಂಟು ಗಂಟೆಯೊಳಗೆ ಲಸಿಕೆ ಪಡೆಯಬೇಕು. ಅಕಸ್ಮಾತ್ ಗಾಯ ತೀವ್ರವಾಗಿದ್ದರೆ ಗಾಯದ ಸುತ್ತಲೂ ರೇಬಿಸ್  ಇಮ್ಯುನೋಗ್ಲೋಬುಲಿನ್ ಚುಚ್ಚುಮದ್ದು ತೆಗೆದುಕೊಳ್ಳಬೇಕು.



 ಕೊನೆಯದಾಗಿ ಈ ವಿಷಯದಲ್ಲಿ ಮನೆ ಮದ್ದು ಬಳಸುವುದು ಅಥವಾ ನಾಟಿ ವೈದ್ಯರನ್ನು ಸಂಪರ್ಕಿಸುವುದು ಸಾವಿಗೆ ಆಹ್ವಾನ ಕೊಟ್ಟಂತೆ.

 ಕೃಪೆ : ಡಾ. ಮುರಳಿಧರ ಕಿರಣಕೆರೆ,

 ಬರಹ ಸಂಯೋಜನೆ --  ಸಂತೋಷ್ ಮಂಡ್ಯಗೌಡ

ಸಾವಿಗೂ ಮುನ್ನ..!

 

ನಿಮಗೆ ಇಷ್ಟವಾಗುತ್ತೋ ಬಿಡುತ್ತೋ ಗೊತ್ತಿಲ್ಲ. ಇವತ್ತಲ್ಲ ನಾಳೆ ಒಂದಲ್ಲಾ ಒಂದು ದಿನ ನಾವು ಮಣ್ಣಾಗಲೇಬೇಕು. ಇದನ್ನು ಒಂದು ಸಣ್ಣ ಕಥೆಯ ಮೂಲಕ ಅರ್ಥ ಮಾಡಿಸುವ ಪ್ರಯತ್ನ ಮಾಡುತ್ತೇನೆ.
 ಒಂದು ದಿನ ಅಮೆರಿಕಾದ ಹೆಸರಾಂತ ಉದ್ಯಮಿ, ಹೂಡಿಕೆದಾರ, ಲೇಖಕ, ದಾನಿ ಮತ್ತು ರಾಜಕಾರಣಿಯಾದ ಟೆಡ್ ಲಿಯೋನ್ ಅವರು ವಿಮಾನದಲ್ಲಿ ಹೋಗುತ್ತಿರುವಾಗ ಪೈಲೆಟ್ ವಿಮಾನ ಪತನವಾಗುವ ಸೂಚನೆ ನೀಡುತ್ತಾನೆ. ಟೆಡ್  ಲಿಯೋನ್ ಗೆ ಸಾವು ಕಣ್ಣ ಮುಂದೆ ಬಂದು ನಿಂತಿರುವ ಅನುಭವವಾಗುತ್ತದೆ. ತಕ್ಷಣ ಟೆಡ್ ಲಿಯೋನ್ ಅವರು ಜೀವನದಲ್ಲಿ ತಾನು ಅತಿ ಶೀಘ್ರವಾಗಿ ಮಾಡಲೇಬೇಕಾದ ಕೆಲಸಗಳು, ಭೇಟಿ ಮಾಡಬೇಕಾದ ವ್ಯಕ್ತಿಗಳು ಮತ್ತು ನೋಡಬೇಕಾದ ಸ್ಥಳಗಳ ಬಗ್ಗೆ ಯೋಚಿಸುತ್ತಾ ಕುಳಿತಿರುತ್ತಾನೆ. ಅವನ ಅದೃಷ್ಟಕ್ಕೆ ವಿಮಾನ ಸುರಕ್ಷಿತವಾಗಿ ಕೆಳಗಿಳಿಯುತ್ತದೆ.
 ವಿಮಾನದಿಂದ ಇಳಿದ ತಕ್ಷಣವೇ ವಿಮಾನ ನಿಲ್ದಾಣದಲ್ಲಿ ಕುಳಿತು ಜೀವನದಲ್ಲಿ ಮಾಡಬೇಕಾದ 101 ಕೆಲಸಗಳ ಪಟ್ಟಿ ತಯಾರು ಮಾಡಿ ಸಾಯುವ ಮುಂಚೆ ಅದನ್ನು ಪೂರ್ತಿಗೊಳಿಸುವ ಪ್ರತಿಜ್ಞೆ ಮಾಡುತ್ತಾನೆ. ತದನಂತರ ಕೆಲವೇ ಕೆಲವು ವರ್ಷಗಳಲ್ಲಿ ಎಷ್ಟೋ ಕೆಲಸಗಳನ್ನು ಮಾಡಿ ಮುಗಿಸಿರುತ್ತಾನೆ.
 ಈ ಸಣ್ಣ ನಿಜ ಜೀವನದಲ್ಲಿ ನಡೆದ ನೈಜ ಕಥೆಯನ್ನು ನೋಡಿದರೆ ನಮ್ಮ ಜೀವನದಲ್ಲೂ ಅತೀ ಶೀಘ್ರವಾಗಿ ಮಾಡಬೇಕಾದ ಒಳ್ಳೆಯ ಕೆಲಸಗಳ ಪಟ್ಟಿ ತಯಾರಿ ಮಾಡುವುದು ಉತ್ತಮವೆನಿಸುತ್ತದೆ.
 ಯಾರಿಗೆ ಗೊತ್ತು ಜವರಾಯ ಯಾವ ದಾರಿಯಲ್ಲಿ ನಮ್ಮ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದಾನೆ ಅಂತಾ?

ಕೃಪೆ: ರಾಬಿನ್ ಶರ್ಮಾ

ಭಾಷಾಂತರ

-- ಸಂತೋಷ್ ಮಂಡ್ಯಗೌಡ 

ದಿನಕ್ಕೆ ಎಂಟು ಗಂಟೆ ನಿದ್ರೆ ಮಾಡುವವರೇ ಶ್ರೀಮಂತರು..!

      ಪ್ರಪಂಚದಲ್ಲಿ ಯಾವುದಾದರೂ ಪ್ರಾಣಿಗಳು ಹೃದಯಾಘಾತ ಅಥವಾ ಲಕ್ವಾ ಒಡೆದು ಸತ್ತ ಉದಾಹರಣೆಗಳಿವೆಯೇ? ಖಂಡಿತ ಇಲ್ಲ. ಏಕೆಂದರೆ ಅವುಗಳು ದಿನದ ಮೂರನೇ ಒಂದು ಭಾಗ ಅಂದರೆ ಎಂಟು ಗಂಟೆಗಳಿಗಿಂತ ಜಾಸ್ತಿ ನಿದ್ರೆ ಮಾಡುತ್ತವೆ.

    ಇನ್ನು ಮನುಷ್ಯರ ವಿಚಾರಕ್ಕೆ ಬಂದರೆ ವಯಸ್ಕರಿಗೆ 8 ನಿದ್ರೆಯ ಅವಶ್ಯಕತೆ ಇದ್ದರೆ, ಮಕ್ಕಳಿಗೆ 10 ಗಂಟೆ ನಿದ್ರೆಯ ಅವಶ್ಯಕತೆ ಇರುತ್ತದೆ. ಇನ್ನು ಸರಳವಾಗಿ ಹೇಳಬೇಕಾದರೆ ಮೊಬೈಲನ್ನು ಅರ್ಧ ಚಾರ್ಜ್ ಮಾಡಿದರೆ ಎಷ್ಟು ಹೊತ್ತು ಉಪಯೋಗಿಸಬಹುದೋ, ಹಾಗೆ, ಮನುಷ್ಯ ಅರ್ಧ ನಿದ್ರೆ ಮಾಡಿದರೆ ಸರಿಯಾಗಿ ಅರ್ಧದಷ್ಟು ಕೆಲಸವನ್ನು ಅವರಿಂದ ನಿರೀಕ್ಷಿಸಲು ಮಾತ್ರ ಸಾಧ್ಯ.

    ಇನ್ನು ಸ್ಪಷ್ಟವಾಗಿ ಹೇಳಬೇಕಾದರೆ ಸರಿಯಾಗಿ ನಿದ್ದೆ ಮಾಡದೆ ಹೋದರೆ, ಅದು ಮಕ್ಕಳ ಕಲಿಕೆ, ನೆನಪಿನ ಶಕ್ತಿ ಮತ್ತು ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಮತ್ತು ವಯಸ್ಕರಲ್ಲಿ ರಕ್ತದೊತ್ತಡ, ಸ್ಥೂಲಕಾಯ ಹೆಚ್ಚು ಮಾಡುತ್ತದೆ.

    ಇನ್ನು ಸಂಕ್ಷಿಪ್ತವಾಗಿ ಹೇಳಬೇಕಾದರೆ, ದಿನನಿತ್ಯ ನಾವು ಸೇವಿಸುವ ಆಹಾರದಿಂದ ಉಂಟಾಗುವ ಶಾರೀರಿಕ ತ್ಯಾಜ್ಯವನ್ನು ಹೊರಹಾಕಲು ಯಾವ ರೀತಿ ನಾವು ಪ್ರತಿನಿತ್ಯ ಶೌಚಾಲಯಕ್ಕೆ ಹೋಗುತ್ತಿವೋ, ಅದೇ ರೀತಿ ಮಾನಸಿಕ ತ್ಯಾಜ್ಯಗಳನ್ನು ಹೊರಹಾಕಲು ಪ್ರತಿನಿತ್ಯ ನಾವು ಎಂಟು ಗಂಟೆಗಳ ಗಡತ್ತಾದ ನಿದ್ದೆ ಮಾಡಬೇಕು.

    ಸಂಶೋಧನೆಯ ಪ್ರಕಾರ, ಬೇಸಿಗೆ ಕಾಲದಲ್ಲಿ ಒಂದು ಗಂಟೆ ಕಡಿಮೆ ನಿದ್ರೆ ಮಾಡಿದರೆ ಮುಂದಿನ ದಿನ ಶೇಕಡ 24 ರಷ್ಟು ಹೃದಯಘಾತವಾಗುವ ಸಂಭವವಿರುತ್ತದೆ.
ಚಳಿಗಾಲದ ಸಮಯದಲ್ಲಿ ಒಂದು ಗಂಟೆ ಹೆಚ್ಚು ನಿದ್ರೆ ಮಾಡಿದರೆ, ಅದರ ಮುಂದಿನ ದಿನ ಹೃದಯಾಘಾತದ ಸಂಭವ ಶೇ. 21ರಷ್ಟು ಕಡಿಮೆಯಾಗುತ್ತದೆ.
    ಆದ್ದರಿಂದ  ದಿನಕ್ಕೆ ಎಂಟು ಗಂಟೆ ನಿದ್ರೆ ಮಾಡುವವರೇ ಶ್ರೀಮಂತರು!


ಈಗ ನಿದ್ರಾಹೀನತೆಯಿಂದ ಉಂಟಾಗುವ ಅಡ್ಡ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ...

1965ನೇ ಇಸವಿಯಲ್ಲಿ 17 ವರ್ಷದ ವಿದ್ಯಾರ್ಥಿ ನಿದ್ರೆನೇ ಮಾಡದೇ ಹೋದರೆ ಏನಾಗುತ್ತೆ ಅಂತ 264 ಗಂಟೆ ಅಂದರೆ 11 ದಿನ ಎಚ್ಚರವಾಗಿ ಸಂಶೋಧನೆಗೆ ಒಳಪಟ್ಟಿದ್ದ. 11 ದಿನಗಳ ನಂತರ ಅವನ ದೃಷ್ಟಿ ಕಡಿಮೆಯಾಗಿ, ವಸ್ತುಗಳನ್ನು ಸ್ಪರ್ಶದಿಂದ ಗುರಿತಿಸುವುದು ಕಡಿಮೆಯಾಯಿತು. ತದನಂತರ ನೆನಪಿನ ಶಕ್ತಿ ಕ್ಷೀಣಿಸುತ್ತಾ ಹೋಗಿ ಕೊನೆಗೆ ಬುದ್ಧಿಬ್ರಮಣೆಯಾಗುತ್ತಾ ಹೋಯಿತು.
    ಇನ್ನೊಂದು ಉದಾಹರಣೆಯಲ್ಲಿ, 2014ರಲ್ಲಿ ಫುಟ್ಬಾಲ್ ಪ್ರೇಮಿಯೊಬ್ಬರು ಸತತ 48 ಗಂಟೆಗಳ ಕಾಲ ಫುಟ್ಬಾಲ್ ವರ್ಲ್ಡ್ ಕಪ್ ನೋಡುತ್ತಾ ಶಿವನಪಾದ ಸೇರಿದ್ದ. ಅದಕ್ಕೆ ವೈದ್ಯಕೀಯ ಕಾರಣ ಕಡಿಮೆ ನಿದ್ರೆಯಿಂದ ಲಕ್ವ ಹೊಡೆದು  ಮೃತಪಟ್ಟಿದ್ದ.

    ಈಗ ನಮ್ಮ ಪುನೀತ್ ರಾಜಕುಮಾರ್ ರವರ ದಿನಚರಿ ನೆನಪಿಸಿಕೊಳ್ಳಿ. ಪ್ರತಿನಿತ್ಯ ರಾತ್ರಿ ಲೇಟ್ ನೈಟ್ ಪಾರ್ಟಿಗಳು ಮತ್ತು ಮುಂಜಾನೆ ತೀವ್ರವಾದ ದೈಹಿಕ ವ್ಯಾಯಾಮಗಳು. ಅವರ ಸಾವಿಗೆ ಕಡಿಮೆ ನಿದ್ರೆಯ ಜೊತೆ ಸೆಲೆಬ್ರಿಟಿ ಒತ್ತಡವು ಒಂದು ಕಾರಣವಿರಬಹುದು. ಇದೇ ಕಾರಣಕ್ಕೆ ಪ್ರತಿನಿತ್ಯ ಪ್ರಪಂಚದಲ್ಲಿ ನೂರಾರು ಜನ ಸಾಯುತ್ತಾ ಇರುತ್ತಾರೆ ಅವರ್ಯಾರು ಸೆಲೆಬ್ರಿಟಿ ಆಗದೇ ಇರುವುದರಿಂದ ನಮಗೆ ಗೊತ್ತಿರುವುದಿಲ್ಲ ಅಷ್ಟೇ.

8 ಗಂಟೆ ಸುಖನಿದ್ರೆಯ ಮೊದಲ ಸೂತ್ರವೇ ಕ್ರಮಬದ್ಧ ಜೀವನ ಶೈಲಿ. ಅದು ಶನಿವಾರವಾದರೂ ಇರಬಹುದು ಅಥವಾ ಸೋಮವಾರವಾದರೂ ಇರಬಹುದು, ದಿನನಿತ್ಯ ರಾತ್ರಿ ಒಂದೇ ಸಮಯಕ್ಕೆ ಮಲಗಬೇಕು ಮತ್ತು ಬೆಳಿಗ್ಗೆ ಒಂದೇ ಸಮಯಕ್ಕೆ ಎದ್ದೇಳಬೇಕು.
    ಎರಡನೇ ಸೂತ್ರವೆಂದರೆ ಮಲಗುವ ರೂಮಿನ ಉಷ್ಣಾಂಶವನ್ನು 18° ಡಿಗ್ರಿ ಸೆಲ್ಸಿಯಸ್  ಇರುವಂತೆ ನೋಡಿಕೊಂಡರೆ ಉತ್ತಮ ನಿದ್ರೆ ಬರುತ್ತದೆ.
    ಮೂರನೇ ಸೂತ್ರವೆಂದರೆ ರಾತ್ರಿ 8 ಗಂಟೆಗೆ ಮೊದಲೇ ಊಟ ಮುಗಿಸಿ, 10 ಗಂಟೆಯ ಒಳಗೆ ಮಲಗಿದರೆ ಬೆಳಗ್ಗೆ 6 ಗಂಟೆಗೆ ಎದ್ದೇಳಬಹುದು.

        ಕೊನೆಯದಾಗಿ ಹೆಚ್ಚು ನಿದ್ರೆ ಮಾಡಿದರಷ್ಟೇ ಜಾಸ್ತಿ ದಿನ ಬದುಕಬಹುದು ಅಂತ ಏನಾದರೂ ಎಂಟು ಗಂಟೆಗಿಂತ ಜಾಸ್ತಿ ಮಲಗಿದರೆ, ಭಗವದ್ಗೀತೆಯಲ್ಲಿ ಹೇಳಿರುವಂತೆ ದುಃಖ ದಾರಿದ್ಯ ನಮ್ಮನ್ನು ಅಟ್ಟಾಡಿಸಿಕೊಂಡು ಬರುತ್ತದೆ ಮತ್ತು ಈ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಬದುಕಲು ನಿಜವಾಗಲೂ ಸಾಧ್ಯವಿಲ್ಲ.

                                                                                    -- ಪ್ರೊ.  ಸಂತೋಷ್ ಮಂಡ್ಯಗೌಡ 

ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಣದ ಮಹತ್ವ

ಮಗುವಿನ ಮೊದಲ ಆರು ವರ್ಷಗಳಲ್ಲೇ ಮೆದುಳಿನಲ್ಲಿ ಶೇಕಡ 90ರಷ್ಟು ಬೆಳವಣಿಗೆ ಆಗಿರುತ್ತದೆ. ಒಂದು ಮಗು ಆರು ವರ್ಷದಿಂದ 60 ವರ್ಷಗಳವರೆಗೆ ಕಲಿಯುವ ವಿದ್ಯೆಗಿಂತಲೂ ಅತಿಹೆಚ್ಚನ್ನು ಆರು ವರ್ಷದ ಒಳಗೆ ಕಲಿತಿರುತ್ತದೆ. ಈ ಪ್ರಮುಖ ಸಮಯದಲ್ಲಿ ಪ್ರತಿಯೊಂದು ಮಗುವು ಪ್ರತಿದಿನ ಪ್ರತಿ ಕ್ಷಣ ಹೊಚ್ಚಹೊಸದನ್ನು ಕಲಿಯುತ್ತಲೇ ಇರುತ್ತದೆ. ಮಕ್ಕಳು ಈ ವಯಸ್ಸಿನಲ್ಲಿ ಮಾಡುವಷ್ಟು ಶತ ಪ್ರಯತ್ನವನ್ನು ಉಳಿದ ಜೀವನದಲ್ಲಿ ಶೇ. ಹತ್ತರಷ್ಟನ್ನು ಪ್ರಯತ್ನಿಸುವುದಿಲ್ಲ ಎಂಬುದಕ್ಕೆ ಪೋಷಕರೇ ಉತ್ತಮ ಉದಾಹರಣೆ. 

ಒಂದು ಮಗುವಿಗೆ ಎರಡು ವರ್ಷ ತುಂಬಿದ ನಂತರ ಮನೆಯ ವಾತಾವರಣದಲ್ಲಿ ಹೊಸದಾಗಿ ಕಲಿಯಲು ಏನು ಉಳಿದಿರುವುದಿಲ್ಲ. ಆದ್ದರಿಂದ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಯ ಪ್ರಪ್ರಥಮ ಹೆಬ್ಬಾಗಿಲಾದ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ನೋಂದಾಯಿಸಿ ತನ್ನ ವಯಸ್ಸಿನ ಇತರ ಮಕ್ಕಳೊಡನೆ ಬೆಳೆಯಲು ಬಿಡಬೇಕು. ಆ ಸಮಯದಲ್ಲಿ ಬೇರೆ ಮಕ್ಕಳ ಜೊತೆ ಬೆರೆಯುತ್ತಾ ತನ್ನ ವ್ಯಕ್ತಿತ್ವದ ಬಗ್ಗೆ ಅರಿವಾಗುತ್ತಾ ಹೋಗುತ್ತದೆ. ಮಕ್ಕಳು ಸಮಾಜದಲ್ಲಿ ಎಲ್ಲರೊಡನೆ ಹೊಂದಾಣಿಕೆ ಮಾಡಿಕೊಂಡು ಬದುಕಲು ಕಲಿಯುತ್ತಾ ಹೋದಂತೆ ಅವರ ವ್ಯಕ್ತಿತ್ವ ವಿಕಾಸನವಾಗುತ್ತದೆ. 


       ಅಮೆರಿಕಾದ ಒಂದು ಸರ್ವೆಯ ಪ್ರಕಾರಸರಿಯಾದ ಪೂರ್ವ ಪ್ರಾಥಮಿಕ ಶಿಕ್ಷಣವಿಲ್ಲದೆ ಒಂದನೇ ತರಗತಿ ಸೇರುವ ಮಕ್ಕಳಲ್ಲಿ ಶೇ.60ಕ್ಕಿಂತ ಕಡಿಮೆ ಮಕ್ಕಳು ಕಾಲೇಜು ಹಂತ ತಲುಪುತ್ತಾರೆ. ಉಳಿದ ಶೇ.40 ರಲ್ಲಿ ಅರ್ಧದಷ್ಟು ಮಕ್ಕಳು ಶಾಲೆ ಬಿಟ್ಟರೆಇನ್ನುಳಿದ  ಅರ್ಧದಷ್ಟು ಮಕ್ಕಳು ಬಾಲ್ಯದಲ್ಲೇ ಮದುವೆಯಾಗುತ್ತಾರೆ. 


      ಬಹು ಮುಖ್ಯವಾಗಿ  ಮೂರನೇ ತರಗತಿಗೆ ಕಾಲಿಡುವ ಮುನ್ನ ಮಕ್ಕಳು ಕನಿಷ್ಠ ಒಂದು ಭಾಷೆಯನ್ನಾದರೂ ಓದಲು ಬರುತ್ತಿದ್ದರೆ ಆ ಮಕ್ಕಳು ಪದವೀಧರವಾಗುವುದರಲ್ಲಿ ಯಾವುದೇ ಅನುಮಾನವಿರುವುದಿಲ್ಲ. ಇಲ್ಲವಾದರೆ ಅವರು ಪದವೀಧರರಾಗುವುದೇ ಅನುಮಾನ.                


       ಪ್ರಮುಖವಾಗಿ ಪೂರ್ವ ಪ್ರಾಥಮಿಕ ಶಾಲೆಯ ಗುಣಮಟ್ಟದ ಶಿಕ್ಷಣದ ಆಧಾರದ ಮೇಲೆ ಮಕ್ಕಳ ಮುಂದಿನ ಭವಿಷ್ಯ ನಿರ್ಧಾರವಾಗುತ್ತದೆ. ಗಿಡ ನೆಟ್ಟು ಬೆಳೆಯುತ್ತಿದ್ದಾಗ ನೀರು-ಗೊಬ್ಬರ ಹಾಕಿ ಆರೈಕೆ ಮಾಡುವುದು ಒಳ್ಳೆಯದು.


ಅಂತರಾಷ್ಟ್ರೀಯ ಮಟ್ಟದ ವೈಜ್ಞಾನಿಕ ಸಂಶೋಧನಾ ಪತ್ರಿಕೆಯಾದ ನೇಚರ್ ಜರ್ನಲ್,   ಗುಣಮಟ್ಟದ ಶಿಕ್ಷಣದ ಬಗ್ಗೆ ಏನು ಹೇಳುತ್ತೆ ಅಂತ ಅದರ ಮಾತಿನಲ್ಲೇ ಕೇಳಿ...

Children who excel at the math portion of the Scholastic Aptitude Test (SAT) are The kids who test in the top 1% tend to become our eminent scientists and academics, our Fortune 500 CEOs and federal judges, senators and billionaires".

-- Nature Reports.


Suitably Noble Research 

     ಅಮೆರಿಕ ಚೈನಾ ಮತ್ತು ಇನ್ನು ಮುಂತಾದ ಮುಂದುವರೆದ ದೇಶಗಳ ಅಂಕಿ ಅಂಶಗಳನ್ನು ಆಧರಿಸಿ, ಪ್ರಖ್ಯಾತ ನೊಬೆಲ್ ಪ್ರಶಸ್ತಿ ಪುರಸ್ಕೃತ Heckman ತಯಾರಿಸಿದ  Heckman Curve ನಿಂದ ತಿಳಿಯುವುದೇನೆಂದರೆ...


        "ಯಾವ ಮಕ್ಕಳು ಅತಿ ಚಿಕ್ಕ ವಯಸ್ಸಿನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು Skills ಪಡೆದಿರುತ್ತಾರೋ ಆ ಮಕ್ಕಳು ಬೆಳೆದು ದೊಡ್ಡವರಾದ ನಂತರ ಅಷ್ಟೇ ಗುಣಮಟ್ಟದ ಜೀವನ ನಡೆಸುತ್ತಾರೆ.


    ಇದನ್ನು ಇನ್ನೂ ಸರಳವಾಗಿ ಹೇಳಬೇಕೆಂದರೆ... ನಾವು ಎಷ್ಟು ಬೇಗ ಬೀಜವನ್ನು ಬಿತ್ತು ಪೋಷಿಸುತ್ತೇವೋ ಅಷ್ಟೇ ಬೇಗ ಮರಗಳು ಬೆಳೆದು ನಿಂತು ಫಲ ಕೊಡುತ್ತವೆ. ಎಷ್ಟು ನಿಧಾನ ವಿಳಂಬ ಮಾಡುತ್ತಿವೋ ಅಷ್ಟೇ ನಿಧನವಾಗಿ ಬೆಳೆದು ನಿಧಾನವಾಗಿ ಫಲ ಕೊಡುತ್ತವೆ.


    ಆದ್ದರಿಂದ ಮಕ್ಕಳು ತುಂಬಾ ಚಿಕ್ಕವರಿದ್ದಾಗ ಉಡಾಫೆ ಮಾಡದೆ ಅವರ ವಯಸ್ಸಿಗೆ ತಕ್ಕಂತೆ ಅವಶ್ಯಕತೆ ಇರುವ ಪೂರ್ವ ಶಾಲಾ ಶಿಕ್ಷಣ, ಈಜು ಚೆಸ್ ಸೈಕಲ್ ಕರಾಟೆ ಇನ್ನು ಮುಂತಾದ ಜೀವನಕ್ಕೆ ಅವಶ್ಯಕತೆ ಇರುವ ವಿದ್ಯೆಗಳನ್ನು ಕಲಿಸುವ ವ್ಯವಸ್ಥೆ ಮಾಡುವುದು ಮಕ್ಕಳ ಭವಿಷ್ಯದ ದೃಷ್ಟಿಯಿಂದ ತುಂಬಾ  ಒಳ್ಳೆಯದು.

--ಪ್ರೊ. ಸಂತೋಷ್ ಮಂಡ್ಯಗೌಡ 


"ರಾಷ್ಟ್ರೀಯ ಮುಕ್ತ ವಿದ್ಯಾಲಯ"ದ ಸ್ವತಂತ್ರ ಶಿಕ್ಷಣ ಕಲಿಕಾ ವ್ಯವಸ್ಥೆ. NIOS - (National Institute of Open Schooling)

 


ನಿಮ್ಮ ಮಕ್ಕಳಿಗೆ ನೀವೇ ಮನೆಯಲ್ಲಿ ಹೇಳಿಕೊಡುವ ಅರ್ಹತೆ, ಸಾಮರ್ಥ್ಯ & ಬಿಡುವು ಇದ್ದರೆ, NIOS (CBSE) - National institute of Open Schooling, ಅಂದರೆ "ರಾಷ್ಟೀಯ ಮುಕ್ತ ವಿದ್ಯಾಲಯ"ದಲ್ಲಿ ಮಕ್ಕಳನ್ನು ಆನ್ಲೈನ್ ದಾಖಲು ಮಾಡಿ, ಮನೆಯಲ್ಲಿಯೇ ಓದಿಸಿ, ನೇರವಾಗಿ 3ನೇ, 5ನೇ, 8ನೇ, & 10ನೇ ತರಗತಿ ಪರೀಕ್ಷೆ ಬರೆಸಿ ಅಂಕಪಟ್ಟಿ ಪಡೆಯಬಹುದು..!

NIOS ನಲ್ಲಿ 10ನೇ ತರಗತಿ ಅಥವಾ 12ನೇ ತರಗತಿ ಪರೀಕ್ಷೆ ಬರೆದ ಮಕ್ಕಳನ್ನು ನಂತರ ನೇರವಾಗಿ ರಾಜ್ಯದ ಅಥವಾ ದೇಶದ ಯಾವುದೇ ಬೋರ್ಡ್ ಸ್ಕೂಲ್, ಕಾಲೇಜು, ಯೂನಿವರ್ಸಿಟಿಗೆ ಸೇರಿಸಿ ವಿದ್ಯಾಭ್ಯಾಸ ಮುಂದುವರೆಸಬಹುದು. ತದನಂತರ ರಾಜ್ಯದ ಅಥವಾ ದೇಶದ ಖಾಸಗಿ, ಸರ್ಕಾರಿ ಸಂಸ್ಥೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಸಿ ಸರ್ಕಾರಿ ಕೆಲಸಕ್ಕೆ ಸೇರಿಸಬಹುದು..!

ಕಾರಣಾಂತರಗಳಿಂದ ಶಿಕ್ಷಣ ಅರ್ಧದಲ್ಲಿ ನಿಂತಿದ್ದರೆ, ನಿಮ್ಮ ವಯಸ್ಸಿನ ಆಧಾರದ ಮೇಲೆ ನೇರವಾಗಿ NIOS ನಲ್ಲಿ ಅರ್ಜಿ ಸಲ್ಲಿಸಿ 3ನೇ, 5ನೇ, 8ನೇ 10ನೇ, 12ನೇ ತರಗತಿಗಳ ಪರೀಕ್ಷೆ ಬರೆದು, ಯಾವುದೇ ರಾಜ್ಯದ ಅಥವಾ ದೇಶದ, ಖಾಸಗಿ ಅಥವಾ ಸರ್ಕಾರಿ ಅಥವಾ ವಿದೇಶಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಮುಂದುವರಿಸಬಹುದು. ಇದಕ್ಕೆ ಸರ್ಕಾರದ ಮಾನ್ಯತೆ ಇರುತ್ತದೆ.

NIOS ನಲ್ಲಿ ದಾಖಲಾಗಿ ಓದುವ ಮಕ್ಕಳಿಗೆ ತಮಗೆ ಇಷ್ಟ ಬಂದಂತ ವಿಷಯಗಳನ್ನು ಆರಿಸಿ ಪರೀಕ್ಷೆ ಬರೆಯುವ ಅವಕಾಶಗಳಿರುತ್ತದೆ. ಈ ಅವಕಾಶ ರೆಗ್ಯುಲರ್ ಶಾಲೆಗಳಲ್ಲಿ ಇರುವುದಿಲ್ಲ. ರೆಗ್ಯುಲರ್ ಶಾಲೆಯಲ್ಲಿ ನಿಮಗೆ ಇಷ್ಟವಿಲ್ಲದಿದ್ದರೂ ಕೆಲವೊಂದು ವಿಷಯಗಳನ್ನು ಕಡ್ಡಾಯವಾಗಿ ಓದಲೇಬೇಕು. ಆದ್ದರಿಂದ NIOS ಶಿಕ್ಷಣ ಪದ್ಧತಿ ದೇಶದಲ್ಲೇ ಉತ್ತಮ ಎಂದು ಹೇಳಬಹುದು!

ಕೊನೆಯದಾಗಿ,

NIOS ನಲ್ಲಿ ದಾಖಲಾತಿ ಪಡೆದು, 1 ಭಾಷಾ ವಿಷಯ & 3 ಇತರ ವಿಷಯಗಳಾದ ಗಣಿತ, ವಿಜ್ಞಾನ, ಸಮಾಜದಲ್ಲಿ ಪರೀಕ್ಷೆ ಬರೆದು 'B'  ಸರ್ಟಿಫಿಕೇಟ್ ಪಡೆದರೆ 5ನೇ ತರಗತಿಯಲ್ಲಿ ನವೋದಯ ಪರೀಕ್ಷೆ ಬರೆದು, ಪಾಸ್ ಆದರೆ 6 - 12ನೇ ತರಗತಿವರೆಗೆ ನವೋದಯ ವಿದ್ಯಾಲಯದಲ್ಲಿ ಶಿಕ್ಷಣ ಪಡೆಯಬಹುದು. ನೆನಪಿರಲಿ ತ್ರಿಭಾಷ ಸೂತ್ರ ಕೈ ಬಿಟ್ಟಿರುವ ಏಕೈಕ ವಿದ್ಯಾಲಯ NIOS..!

NIOS ಬಗ್ಗೆ ಜನರು ಸರಿಯಾಗಿ ತಿಳಿದುಕೊಂಡರೆ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ..!

ಹೆಚ್ಚಿನ ಮಾಹಿತಿಗಾಗಿ...

https://www.nios.ac.in/

             ಸಂಯೋಜನೆ: ಪ್ರೋ. ಸಂತೋಷ್ ಮಂಡ್ಯಗೌಡ

ವೇಗವಾಗಿ ಇಂಗ್ಲೀಷ್ ಓದುವುದರಲ್ಲಿ ರಾಷ್ಟ್ರೀಯ ಮಟ್ಟದ ದಾಖಲೆ ಬರೆದ ಮಂಡ್ಯ ಕಬ್..!

 

 
ತಾಲೂಕಿನ ಭೂತನ ಹೊಸೂರು ಗ್ರಾಮದ 5 ವರ್ಷ 8 ತಿಂಗಳ ಪುಟಾಣಿ ದೇವಾನಂದನ್, 200 ಇಂಗ್ಲಿಷ್ ಪದಗಳನ್ನು ಕೇವಲ 2 ನಿಮಿಷ 58 ಸೆಕೆಂಡ್ ಗಳಲ್ಲಿ ವೇಗವಾಗಿ ಓದಿ ರಾಷ್ಟ ಮಟ್ಟದ ದಾಖಲೆ ನಿರ್ಮಿಸಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಇನ್ನೂ UKG ಯಲ್ಲಿ ಓದುತ್ತಿರುವ ದೇವಾನಂದನ್ ಎಲ್ಲಾ ಕನ್ನಡ ದಿನಪತ್ರಿಕೆಯನ್ನು ಸರಾಗವಾಗಿ ಓದುತ್ತಾ, ಪುಸ್ತಕದಲ್ಲಿ ಇರುವ ಪ್ರಿಂಟಿಂಗ್ ತಪ್ಪುಗಳನ್ನು ಹುಡುಕಿ ತೋರಿಸುವಷ್ಟು ಕನ್ನಡದಲ್ಲಿ ಹಿಡಿತ ಸಾಧಿಸಿದ್ದಾರೆ.

ಇದರ ಜೊತೆಗೆ CBSE ಇಂಗ್ಲಿಷ್ ಒಂದನೇ ತರಗತಿ ಪುಸ್ತಕವನ್ನು ಓದಿ, ಕನ್ನಡದಲ್ಲಿ ಭಾಷಾಂತರ ಸಹ ಮಾಡುತ್ತಾ ಗಣಿತ ಲೆಕ್ಕಗಳನ್ನು ಬಿಡಿಸುತ್ತಾರೆ. 
ಮೂರುವರೆ ವರ್ಷದಲ್ಲೇ ಈಜು ಕಲಿತಿರುವ ಈ ಪುಟಾಣಿ ಬಾಲಕ ವಾರಾಂತ್ಯದಲ್ಲಿ 30 ಅಡಿ ಆಳದ ಬಾವಿಯಲ್ಲೂ ಸಹಾ ಸ್ವತಂತ್ರವಾಗಿ ಈಜುತ್ತಾರೆ ಎಂಬುದೇ ಈ ಮಗುವಿನ ವಿಶೇಷ.

                                                                                             ಪ್ರೊ. ಸಂತೋಷ್ ಮಂಡ್ಯಗೌಡ

ಗುಣಮಟ್ಟದ ಪಾಠದ ಜೊತೆಗೆ ಮಕ್ಕಳಿಗೆ ಉತ್ತಮ ಗುಣಮಟ್ಟದ ಪುಸ್ತಕ ನೀಡಿ.

 ಒರಿಜಿನಲ್ ಪುಸ್ತಕ ಬೇಕಾದರೆ 8105348290 ಅಥವಾ 9036348290 ನಂಬರ್ ಗೆ ₹2999 ಫೋನ್ ಪೇ ಅಥವಾ ಗೂಗಲ್ ಪೇ ಮಾಡಿ ಸ್ಕ್ರೀನ್ ಶಾಟ್ ಕಳುಹಿಸಿ. ಜೊತೆಗೆ ಸರಿಯಾದ ವಿಳಾಸದ ಪಿ...